HD Kumaraswamy ಹೊಟ್ಟೆನೋವಿಗೆ ಇವರು ಕಾರಣರೆಂದ ಸಿದ್ದರಾಮಯ್ಯ ಅಭಿಮಾನಿಗಳು


  ಹೆಚ್ ಡಿ ಕುಮಾರಸ್ವಾಮಿ / ಸಿದ್ದರಾಮಯ್ಯ

 Siddaramaiah Fans: ಸಿದ್ದರಾಮಯ್ಯ ರೈಟ್ ಚಾಯ್ಸ್ ಫಾರ್ ಸಿಎಂ ಹೆಸರಿನ ಫೇಸ್​ಬುಕ್ ಪೇಜ್ ಮೂಲಕ ಕುಮಾರಸ್ವಾಮಿ ಅವರ ಕಾಲೆಳೆಯಲಾಗಿದೆ.ಬೆಂಗಳೂರು: ನೊಂದ ಜೀವ ಮತ್ತಷ್ಟು ನೋಯಿಸಬೇಡಿ ಎಂಬ ಹೆಸರಿನಲ್ಲಿ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ (Former CM HD Kumaraswamy) ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಅಭಿಮಾನಿಗಳು (CM Siddaramaiah Fans) ತಿರುಗೇಟು ನೀಡಿದ್ದಾರೆ. ಕಳೆದ ಒಂದು ವಾರದಿಂದ ಕಾಂಗ್ರೆಸ್ ವಿರುದ್ಧ ರಾಜಕೀಯ ಸಮರಕ್ಕೆ ಮುಂದಾಗಿರುವ ಕುಮಾರಸ್ವಾಮಿ, ಸಾಲು ಸಾಲು ಆರೋಪಗಳನ್ನು ಮಾಡುತ್ತಿದ್ದಾರೆ. ವೈಎಸ್​​ಟಿ ಟ್ಯಾಕ್ಸ್ (YST Tax), ಇಂಧನ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ನಿನ್ನೆ ಪೆನ್​ಡ್ರೈವ್​ ಪ್ರದರ್ಶಿಸಿ, ಇದರಲ್ಲಿ ವರ್ಗಾವಣೆ ಮಾಡಿಸಲು ಸಚಿವರೊಬ್ಬರು ಹಣ ಕೇಳಿರುವ ಆಡಿಯೋ ಇದೆ ಎಂದು ಹೇಳಿದ್ರು. ಸಿದ್ದರಾಮಯ್ಯ ರೈಟ್ ಚಾಯ್ಸ್ ಫಾರ್ ಸಿಎಂ ಹೆಸರಿನ ಫೇಸ್​ಬುಕ್ ಪೇಜ್ ಮೂಲಕ ಕುಮಾರಸ್ವಾಮಿ ಅವರ ಕಾಲೆಳೆಯಲಾಗಿದೆ.ಮಾನ್ಯ ಕುಮಾರಸ್ವಾಮಿ ಅವರ ಹೊಟ್ಟೆ ನೋವಿಗೆ ಕಾರಣಕರ್ತರುಸಿದ್ದರಾಮಯ್ಯ - ಎಷ್ಟೇ ಪಿತೂರಿ ,ವಿರೋಧ ಮಾಡಿದ್ರು ಎರಡು ಬಾರಿ ದಾಖಲೆ ಬಹುಮತ ಸಿಎಂ ಆಗಿರುವುದು..2.ಚಲುವರಾಯಸ್ವಾಮಿ - 47 ಸಾವಿರದಲ್ಲಿ ಸೋಲಿಸಿ ಡೆಡ್ ಹಾರ್ಸ್ ಎಂದು ಅವಮಾನಿಸಿದ್ದರು ಸಹ ಗೆದ್ದು ಮಂತ್ರಿ ಆಗಿರುವುದು. 3.ಯತೀಂದ್ರ - ತನ್ನ ಪುತ್ರನಿಗೆ ಇರದ ವಿದ್ಯೆ, ಬುದ್ದಿ, ತಾಳ್ಮೆಯ ವ್ಯಕ್ತಿತ್ವ ಮತ್ತು ತಂದೆಗೆ ಹೊಸ ರಾಜಕಾರಣದ ಶೈಲಿ ಬಗ್ಗೆ ಸಹಾಯ ಮಾಡುತ್ತಿರುವುದು. 4.ಡಿಕೆ ಶಿವಕುಮಾರ್ - ಇದೇ ಸ್ಪೀಡ್ ಅಲ್ಲಿ ಹೋಗಿ ಮುಂದೆ ಸಿಎಂ ಆದರೆ ಜಾತಿ ಹಿಡಿತ ಕೈ ತಪ್ಪಿ ತೋಟದ ಮನೆ ಸೇರುವ ಭಯ. 5.ಜಮೀರ್ ಅಹಮದ್ - ತಮ್ಮ ಎಲ್ಲ ಒಳ ಹೊರ ಆಟಗಳನ್ನು ಬಲ್ಲವನಾಗಿದ್ದು ಯಾವುದೇ ಸಮಯದಲ್ಲಿ ತಿರುಗಿ ಬೀಳುವ ಆತಂಕ.6.ಕೆ ಎನ್ ರಾಜಣ್ಣ - ದೇವೇಗೌಡರಿಗೆ 2 ಡೋಸ್ ಕೊಟ್ಟು ಕಳೆದ ಬಾರಿ ಮೂರನೇ ಡೋಸ್ ಕೊಟ್ಟು ಇವಾಗ ಹಾಸನದ ಉಸ್ತುವಾರಿ ಆಗಿ ಅಡ್ಜಸ್ಟ್ ಮೆಂಟ್ ಆದಾಯಕ್ಕೆ ಬ್ರೇಕ್ ಹಾಕಿರೋದು.7.ಶಿವಲಿಂಗೇಗೌಡ - ಮರ್ಯಾದೆ ಬಿಟ್ಟು ತನ್ನ ಸರ್ಕಾರವನ್ನೇ ಕೆಡವಿದ 'ಸಂತೋಷ 'ನ ನಿಲ್ಲಿಸಿದ್ದರೂ ಗೆದ್ದು ಸದನದಲ್ಲಿ ಗುಮ್ಮುತ್ತಿರುವುದು8.ವಾಸು & ಬಾಲಕೃಷ್ಣ - ಎದುರು ಬಾಯಿ ಬಿಟ್ಟರೆ ಬಣ್ಣಗೇಡು ಮಾಡುತ್ತಾರೆ ಎಂಬ ಅಂಜಿಕೆ9.ರೇವಣ್ಣ ಕುಟುಂಬ - ಅಣ್ಣನ ಮಕ್ಕಳು ಮುಂದೆ ಪಕ್ಷ ಹಿಡಿತಕೆ ತೆಗೆದುಕೊಂಡು ಸೋತಿರುವ ಮಗನ ರಾಜಕೀಯ ಭವಿಷ್ಯಕ್ಕೆ ಮುಳುವಾಗುವ ಸಾಧ್ಯತೆ. ಇದನ್ನೂ ಓದಿ: Karnataka Rains: ಲೇಟ್ ಆದ್ರೂ ಅಬ್ಬರಿಸಿ ಬಂದ ಮಳೆರಾಯ, ಬೆಂಗಳೂರಲ್ಲಿ ಹೀಗಿರಲಿದೆ ವಾತಾವರಣಅರ್ಥ ಮಾಡಿಕೊಳ್ಳಿ ನೊಂದ ಜೀವ ಮತ್ತಷ್ಟು ನೋಯಿಸಬೇಡಿ ಎಂದು ಬರೆದು ಅಂತಿಮವಾಗಿ #ಹೊಟ್ಟೆಕಿಚ್ಚು ಎಂಬ ಟ್ಯಾಗ್ ಬಳಸಲಾಗಿದೆ.

Post a Comment

Previous Post Next Post