Health Care: ಬ್ರೇಕ್​ಫಾಸ್ಟ್ – ಊಟ ಏನೇ ತಿಂದ್ರೂ ಎದೆಯುರಿ ಬರ್ತಿದ್ಯಾ? ಹಾಗಾದ್ರೆ ಈ ಸಮಸ್ಯೆಗೆ ಕಾರಣಗಳಿವು!


  ಆಹಾರದ ಆಮ್ಲವು ಅನ್ನನಾಳಕ್ಕೆ ಹಿಂದಿರುಗಿದಾಗ ಕಿರಿಕಿರಿಯ ಭಾವನೆ ಉಂಟಾಗುತ್ತದೆ. ಇದು ಅನೇಕ ಮಂದಿಗೆ ಊಟದ ನಂತರದ ಬರುವ ಸಮಸ್ಯೆಯಾಗಿದೆ. ತಿಂದ ಕೆಲವೇ ನಿಮಿಷಗಳಲ್ಲಿ ಎದೆಯಲ್ಲಿ ಕಿರಿಕಿರಿ ಉಂಟಾಗಿ, ನಂತರ ಮಸಾಲೆಯುಕ್ತ ದ್ರವವು ಬಾಯಿ ಅಥವಾ ಗಂಟಲಿಗೆ ಬರುತ್ತದೆ.ಕೆಲವರಿಗೆ ಬ್ರೇಕ್ಫಾಸ್ಟ್ ಅಥವಾ ಊಟ ಮಾಡಿದ ಮೇಲೆ ಇದ್ದಕ್ಕಿದ್ದಂತೆ ಎದೆಯುರಿ ಕೆಲವು ಅಸ್ವಸ್ಥತೆಯನ್ನು ಉಂಟಾಗಬಹುದು. ಇದನ್ನು ಆಸಿಡ್ ರಿಫ್ಲಕ್ಸ್ ಎಂದು ಕರೆಯಲಾಗುತ್ತದೆ. ಇದಕ್ಕೆ ಮಸಾಲೆಯುಕ್ತ ಆಹಾರ ಅಥವಾ ಹೊರಗಡೆ ಹೊಸದಾಗಿ ತಿಂದ ಆಹಾರ ಪದಾರ್ಥಗಳಂತಹ ಹಲವು ಕಾರಣಗಳು ಎಂದೇ ಹೇಳಬಹುದು. ಸಮಸ್ಯೆ ಏನೇ ಇರಲಿ ಅದನ್ನು ಸರಿಪಡಿಸಿಕೊಂಡು ಹೋಗುವುದು ಬಹಳ ಮುಖ್ಯ. ಇಲ್ಲದಿದ್ದರೆ ಇಡೀ ದಿನ ತೊಂದರೆ ಅನುಭವಿಸಬೇಕಾಗುತ್ತದೆ. ನೀವು ಹೆಚ್ಚಾಗಿ ಎದೆಯುರಿ ಸಮಸ್ಯೆಯಿಂದ ಬಳಲುತ್ತಿದ್ದರೆ, ಅದರ ಬಗ್ಗೆ ಕಾಳಜಿ ವಹಿಸುವುದು ತುಂಬಾ ಮುಖ್ಯ. ಯಾಕೆ ಅಂತೀರಾ ಈ ಸ್ಟೋರಿ ಓದಿ. ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಡಿಸೀಸ್ (GERD): ಇದನ್ನು ದೀರ್ಘಕಾಲದ ಸ್ಥಿತಿ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಆಹಾರದ ಆಮ್ಲವು ಅನ್ನನಾಳಕ್ಕೆ ಹಿಂದಿರುಗಿದಾಗ ಕಿರಿಕಿರಿಯ ಭಾವನೆ ಉಂಟಾಗುತ್ತದೆ. ಇದು ಅನೇಕ ಮಂದಿಗೆ ಊಟದ ನಂತರದ ಬರುವ ಸಮಸ್ಯೆಯಾಗಿದೆ. ತಿಂದ ಕೆಲವೇ ನಿಮಿಷಗಳಲ್ಲಿ ಎದೆಯಲ್ಲಿ ಕಿರಿಕಿರಿ ಉಂಟಾಗಿ, ನಂತರ ಮಸಾಲೆಯುಕ್ತ ದ್ರವವು ಬಾಯಿ ಅಥವಾ ಗಂಟಲಿಗೆ ಬರುತ್ತದೆ. ಇದು ಹೆಚ್ಚು ಎದೆಯುರಿಯ ಕಿರಿಕಿರಿಯನ್ನು ಉಂಟುಮಾಡುತ್ತದೆ. ಕೆಲವೊಮ್ಮೆ ವಾಂತಿ ಬರುವಂತೆ ಕೂಡ ಆಗುತ್ತದೆ.ಹಿಯಾಟಲ್ ಅಂಡವಾಯು: ಹರ್ನಿಯಾದಲ್ಲಿ ಹೊಟ್ಟೆಯು ಎದೆಯ ಕುಹರದೊಳಗಿನ ಡಯಾಫ್ರಾಮ್ ಸ್ನಾಯುಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಈ ಕಾರಣದಿಂದಾಗಿ ನೀವು ಪ್ರತಿ ಊಟದ ನಂತರ ಎದೆಯ ಉರಿ ಸಮಸ್ಯೆಯಿಂದ ಬಳಲುತ್ತೀರಿ. ಇದು ಜೀವನಶೈಲಿ ಬದಲಾವಣೆ ಅಥವಾ ಚಿಕಿತ್ಸೆಗಳಿಂದ ಸರಿಪಡಿಸಬಹುದಾದ ಸಮಸ್ಯೆಯಾಗಿದೆ. ಕೆಲವು ಸಮಸ್ಯೆಗಳಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ. ಆಮ್ಲೀಯ ಮತ್ತು ಕ್ಷಾರೀಯ ಆಹಾರಗಳು: ಮಸಾಲೆಯುಕ್ತ ಆಹಾರಗಳು ಸಾಮಾನ್ಯವಾಗಿ ಎದೆಯುರಿ ಉಂಟುಮಾಡುತ್ತವೆ. ಅಲ್ಲದೇ, ಕೆಲವು ಮಸಾಲೆಗಳು ಅಥವಾ ರುಚಿಗೆ ಸೇರಿಸಲಾದ ಆಹಾರಗಳು ಆಸಿಡ್ ರಿಫ್ಲಕ್ಸ್ಗೆ ಕಾರಣವಾಗಬಹುದು. ಇದನ್ನು ಕಡಿಮೆ ಮಾಡಲು ಹಾಲು ಅಥವಾ ಹಾಲಿನ ಉತ್ಪನ್ನಗಳನ್ನು ಸೇವಿಸುವ ಮೂಲಕ ಸರಿಪಡಿಸಿಕೊಳ್ಳಬಹುದು.ಈ ಸಮಸ್ಯೆ ನಿವಾರಣೆಗೆ ಏನು ಮಾಡಬೇಕು? ಮನೆಮದ್ದುಗಳನ್ನು ಪ್ರಯತ್ನಿಸುವುದು ಮಾತ್ರೆಗಳಿಗಿಂತ ಹೆಚ್ಚು ಅಡ್ಡ ಪರಿಣಾಮಗಳಿಂದ ಮುಕ್ತವಾಗಿದೆ. ಅಲ್ಲದೇ ಕೆಲವು ದೈಹಿಕ ಚಟುವಟಿಕೆಗಳಿಂದಲೂ ತಕ್ಷಣದ ಪರಿಹಾರವನ್ನು ಪಡೆಯಬಹುದು. ಆದರೆ, ನೀವು ಆಗಾಗ್ಗೆ ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ವೈದ್ಯರನ್ನು ಸಂಪರ್ಕಿಸುವುದು ಉತ್ತಮತಿಂದ ನಂತರ ಮಲಗುವುದು: ಊಟ ಮಾಡಿದ ನಂತರ ಮಲಗುವುದು ದೊಡ್ಡ ತಪ್ಪು. ಇದು ಜೀರ್ಣಕ್ರಿಯೆ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಹೊಟ್ಟೆ ಉಬ್ಬರ, ಎದೆಯುರಿಯಂತಹ ಸಮಸ್ಯೆಗಳು ಉಂಟಾಗಬಹುದು.ಕನಿಷ್ಠ 1000 ಹೆಜ್ಜೆಗಳನ್ನು ನಡೆಯಿರಿ: ಊಟದ ನಂತರ 5 ನಿಮಿಷಗಳ ಕಾಲ ವಾಕಿಂಗ್ ಮಾಡಿ. ಇದರಿಂದ ಅನೇಕ ಅನುಕೂಲಗಳಿವೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಒಟ್ಟಾರೆ ಆರೋಗ್ಯಕ್ಕೂ ಒಳ್ಳೆಯದು. ಜೊತೆಗೆ ತಿಂದ ನಂತರ ನೀವು ತಾಜಾತನವನ್ನು ಹೊಂದುತ್ತೀರಿ ಮತ್ತು ಆಯಾಸವನ್ನು ತೊಡೆದುಹಾಕುತ್ತೀರಿ.ವಜ್ರಾಸನದ ಸ್ಥಾನ: ನಿಮಗೆ ನಡೆಯಲು ಸಾಧ್ಯವಾಗದಿದ್ದರೆ 5 ನಿಮಿಷಗಳ ಕಾಲ ವಜ್ರಾಸನ ಮಾಡಿ. ಇದನ್ನು ಆಹಾರ ಸೇವಿಸಿದ ನಂತರ ಮಾಡಬೇಕು. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ

Post a Comment

Previous Post Next Post