ಸಾಂದರ್ಭಿಕ ಚಿತ್ರ
ಹರಿಯಾಣ ಸರ್ಕಾರ ಕಡಿಮೆ ಆದಾಯವುಳ್ಳ 45 ರಿಂದ 60 ವರ್ಷದೊಳಗಿನ ಕಡಿಮೆ ಆದಾಯ ಹೊಂದಿರುವ ಅವಿವಾಹಿತರಿಗೆ ಮಾಸಿಕ 2,750 ರೂಪಾಯಿಗಳ ಭತ್ಯೆಯನ್ನು ನೀಡುವುದಾಗಿ ಗುರುವಾರ ಘೋಷಣೆ ಮಾಡಿದೆ. ಅವಿವಾಹಿತರ ಜೊತೆಗೆ ವಿಧವೆಯವರಿಗೂ ಇದೇ ರೀತಿಯ ಯೋಜನೆಯನ್ನು ಹರಿಯಾಣ ಸರ್ಕಾರ ಪ್ರಕಟಿಸಿದೆ.ಪೊಲೀಸ್ ಸಿಬ್ಬಂದಿಗೆ ಮಾಸಿಕ ಮೊಬೈಲ್ ಭತ್ಯೆಯನ್ನು ಘೋಷಿಸಿದ ಬೆನ್ನಲ್ಲೇ ಹರಿಯಾಣ ಸರ್ಕಾರ (Haryana Govt) ಅವಿವಾಹಿತರಿಗೆ ಬಂಪರ್ ಯೋಜನೆಯೊಂದನ್ನು (Bumper Scheme For Unmarried People) ಘೋಷಣೆ ಮಾಡಿದೆ. ಜೊತೆಗೆ ವಿಧವೆ ಮತ್ತು ವಿಧುರರಿಗೂ ಪಿಂಚಣಿ ನೀಡುವ ಯೋಜನೆಯನ್ನು (Pension Scheme) ಪ್ರಕಟಿಸಿದೆ. ಈ ಎರಡೂ ಯೋಜನೆಯ ಮೂಲಕ ಅವಿವಾಹಿತರಿಗೆ ಮತ್ತು ವಿಧವೆಯರಿಗೆ ಹಣ ಸಹಾಯ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆಅವಿವಾಹಿತರು, ವಿಧವೆಯರಿಗೆ ಮಾಸಿಕ ಪಿಂಚಣಿಹೌದು, ಹರಿಯಾಣ ಸರ್ಕಾರ ಕಡಿಮೆ ಆದಾಯವುಳ್ಳ 45 ರಿಂದ 60 ವರ್ಷದೊಳಗಿನ ಕಡಿಮೆ ಆದಾಯ ಹೊಂದಿರುವ ಅವಿವಾಹಿತರಿಗೆ ಮಾಸಿಕ 2,750 ರೂಪಾಯಿಗಳ ಭತ್ಯೆಯನ್ನು ನೀಡುವುದಾಗಿ ಗುರುವಾರ ಘೋಷಣೆ ಮಾಡಿದೆ. ಅವಿವಾಹಿತರ ಜೊತೆಗೆ ವಿಧವೆಯವರಿಗೂ ಇದೇ ರೀತಿಯ ಯೋಜನೆಯನ್ನು ಹರಿಯಾಣ ಸರ್ಕಾರ ಪ್ರಕಟಿಸಿದೆ.ಮುಂದಿನ ತಿಂಗಳದಿಂದಲೇ ಪಿಂಚಣಿಮುಂದಿನ ತಿಂಗಳಿನಿಂದಲೇ, ಹರಿಯಾಣದಲ್ಲಿ 45 ರಿಂದ 60 ವರ್ಷದೊಳಗಿನ ಅವಿವಾಹಿತರಿಗೆ ಮತ್ತು ವಿಧವೆ, ವಿಧುರರು ತಿಂಗಳಿಗೆ 2,750 ರೂಪಾಯಿ ಪಿಂಚಣಿಗಳನ್ನು ಪಡೆಯಲಿದ್ದಾರೆ. ಇದನ್ನೂ ಓದಿ: ಅಂದು ಹಾಗೆ, ಇಂದು ಹೀಗೆ! ನಿತ್ಯಾನಂದನ ಕೈಲಾಸಕ್ಕೆ ನಟಿ ರಂಜಿತಾನೇ ಪ್ರಧಾನಿ!ಆದಾಯ ಮಿತಿವಾರ್ಷಿಕವಾಗಿ 1.80 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಅವಿವಾಹಿತ ಪುರುಷ ಮತ್ತು ಮಹಿಳೆಯರಿಗೆ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಈ ಯೋಜನೆಯನ್ನು ಹೊರಡಿಸಿದ್ದಾರೆ. ಅದೇ ರೀತಿ ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಹೆಚ್ಚಿರದ ಅದೇ ವಯೋಮಾನದ (40-60 ವರ್ಷ) ವಿಧವೆಯರಿಗೂ ಪಿಂಚಣಿ ಅನ್ವಯಿಸುತ್ತದೆ.ಯೋಜನೆ ಬಗ್ಗೆ ಏನಂದ್ರು ಮನೋಹರ್ ಲಾಲ್ ಖಟ್ಟರ್ಈ ಯೋಜನೆಯ ಹಿಂದಿನ ಉದ್ದೇಶದ ಬಗ್ಗೆ ಮಾತನಾಡಿದ ಸಿಎಂ ಖಟ್ಟರ್, "ಒಂಟಿ ಪುರುಷ ಅಥವಾ ಮಹಿಳೆ ಇಬ್ಬರಿಗೂ ಕೆಲವು ವೈಯಕ್ತಿಕ ಅಗತ್ಯತೆಗಳು ಇರುತ್ತವೆ. ಈ ಮಾಸಿಕ ಪಿಂಚಣಿಯೊಂದಿಗೆ ಸರ್ಕಾರದ ಕಡೆಯಿಂದ ಸ್ವಲ್ಪ ಸಹಾಯವನ್ನು ಅವರು ಪಡೆಯಬಹುದು. ಹೀಗಾಗಿ ಈ ಯೋಜನೆಗೆ ನಿರ್ಧಾರ ಮಾಡಿ ಹೊರಡಿಸಿದ್ದೇವೆ" ಎಂದು ಹೇಳಿದರು.ಸರ್ಕಾರಕ್ಕೆ 240 ಕೋಟಿ ರೂಪಾಯಿ ಹೊರೆಪಿಂಚಣಿ ಯೋಜನೆಯಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 240 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳಲಿದೆ, ಇದನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದು ಸಿಎಂ ಹೇಳಿದರು. ನಿಗದಿತ ವಯೋಮಿತಿ ಮತ್ತು ಆದಾಯ ಮಿತಿಯಲ್ಲಿ ರಾಜ್ಯದಲ್ಲಿ ಒಟ್ಟು 65,000 ಅವಿವಾಹಿತ ಪುರುಷರು, ಮಹಿಳೆಯರು ಮತ್ತು 5,687 ವಿಧವೆಯರು ಇದ್ದಾರೆ. ಈ ಫಲಾನುಭವಿಗಳು 60 ವರ್ಷ ವಯಸ್ಸಾದ ನಂತರ ಸ್ವಯಂಪ್ರೇರಿತವಾಗಿ ವೃದ್ಧಾಪ್ಯ ಪಿಂಚಣಿ ಪಡೆಯಲು ಪ್ರಾರಂಭಿಸುತ್ತಾರೆ ಎಂದು ಅವರು ತಿಳಿಸಿದರು. ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ಮತ್ತೊಂದು ಪ್ರಕಟಣೆಯಲ್ಲಿ, ಸೋಮವಾರದಿಂದ, ಎಲ್ಲಾ ನೋಂದಾಯಿತ ಪತ್ರಗಳು ಸ್ವಯಂಚಾಲಿತವಾಗಿ ರೂಪಾಂತರಗಳನ್ನು ಅನುಸರಿಸುತ್ತವೆ ಎಂದು ಮುಖ್ಯಮಂತ್ರಿ ಹೇಳಿದರು. "ಹಿಂದೆ, ಜನರು ಮ್ಯುಟೇಶನ್ ಮಾಡಲು ಹಲವಾರು ತಿಂಗಳುಗಳು, ಕೆಲವೊಮ್ಮೆ ವರ್ಷಗಳ ಕಾಲ ಕಾಯಬೇಕಾಗಿತ್ತು. ಆದರೆ, ಈ ಹೊಸ ಕಾರ್ಯವಿಧಾನದೊಂದಿಗೆ, ಒಮ್ಮೆ ನೋಂದಾಯಿತ ಪತ್ರವನ್ನು ನೊಂದಾಯಿಸಿದ ನಂತರ, ಅದನ್ನು ರಾಜ್ಯ ಸರ್ಕಾರದ ವೆಬ್ ಪೋರ್ಟಲ್ನಲ್ಲಿ ಹಾಕಲಾಗುತ್ತದೆ. ಅದನ್ನು ಪೋರ್ಟಲ್ನಲ್ಲಿ ನೋಡಿ, ನೋಂದಾಯಿಸಲಾದ ಈ ಸೇಲ್ ಡೀಡ್ನ ವಿರುದ್ಧ ಯಾರಾದರೂ ಆಕ್ಷೇಪಣೆಯನ್ನು ಎತ್ತಲು ಬಯಸಿದರೆ, ಅವರು 10 ದಿನಗಳಲ್ಲಿ ಹಾಗೆ ಮಾಡಬಹುದು. 10 ದಿನಗಳ ಒಳಗೆ ಪೋರ್ಟಲ್ನಲ್ಲಿ ಯಾವುದೇ ಆಕ್ಷೇಪಣೆಯನ್ನು ಸ್ವೀಕರಿಸದಿದ್ದರೆ, ಮ್ಯುಟೇಶನ್ ಸ್ವಯಂಚಾಲಿತವಾಗಿ ಮಾಡಲಾಗುತ್ತದೆ" ಎಂದು ಸಿಎಂ ಖಟ್ಟರ್ ಹೇಳಿದರು ಜೂನ್ 26 ರಂದು ಸಿಎಂ ಖಟ್ಟರ್ ಅವರು ಹರಿಯಾಣ ಪೊಲೀಸ್ ಸಿಬ್ಬಂದಿಗೆ ಇನ್ಸ್ಪೆಕ್ಟರ್ ಶ್ರೇಣಿಯವರೆಗಿನ ಮಾಸಿಕ ಮೊಬೈಲ್ ಭತ್ಯೆಯನ್ನು ನೀಡುವುದಾಗಿ ಘೋಷಿಸಿದ್ದರು. ಕಾನ್ಸ್ಟೆಬಲ್ಗಳು ಮತ್ತು ಹೆಡ್ ಕಾನ್ಸ್ಟೆಬಲ್ಗಳಿಗೆ 200 ರೂ., ಸಹಾಯಕ ಸಬ್ಇನ್ಸ್ಪೆಕ್ಟರ್ಗಳಿಗೆ 250 ರೂ., ಸಬ್ಇನ್ಸ್ಪೆಕ್ಟರ್ಗಳಿಗೆ 300 ರೂ. ಮತ್ತು ಇನ್ಸ್ಪೆಕ್ಟರ್ಗಳಿಗೆ 400 ರೂ.ಗಳನ್ನು ಘೋಷಿಸಿದ್ದಾರೆ ಎಂದು ಅಧಿಕೃತ ಹೇಳಿಕೆ

Post a Comment