BMTF ಅಂತ ಒಂದು ಪೊಲೀಸ್ ವಿಂಗ್ ಇದೆ. ಅದೆಲ್ಲಿದೆ? ಅದೇನು ಮಾಡುತ್ತೆ? ಅನ್ನೋದೆಲ್ಲಾ ಬೆಂಗಳೂರಿನ (Bengaluru) ಬಹುತೇಕ ಮಂದಿಗೆ ಗೊತ್ತಿಲ್ಲ. ಅಷ್ಟರ ಮಟ್ಟಿಗಿದೆ ಆ BMTF ಸಂಸ್ಥೆಯ ಕಾರ್ಯವೈಖರಿ. ಸುಮ್ಮನೆ ಕಾಲಹರಣ ಮಾಡುವ BMTF ಇದೀಗ ಮತ್ತೆ ತನ್ನ ಅಧಿಕಾರ ವ್ಯಾಪ್ತಿ ಹೆಚ್ಚಿಸುವಂತೆ ಮನವಿ (Request) ಮಾಡಿಕೊಂಡಿದೆ.
ಇಲಾಖೆ ನಿರ್ವಹಣೆಗೆ ಪ್ರತಿ ತಿಂಗಳು ಲಕ್ಷ ಲಕ್ಷ ವೆಚ್ಚ.. ಆದರೆ ಕೆಲಸ ಮಾತ್ರ ಶೂನ್ಯ
BMTF ಬೆಂಗಳೂರು ಮೆಟ್ರೋ ಪಾಲಿಟನ್ ಟಾಸ್ಕ್ ಫೋರ್ಸ್. ಸರ್ಕಾರದ ಈ ಇಲಾಖೆ ಸರ್ಕಾರಿ ಸ್ವತ್ತು, ಬಿಬಿಎಂಪಿ ಆಸ್ತಿಗಳನ್ನು ಭೂಗಳ್ಳರಿಂದ, ಮಾಫಿಯಾಗಳಿಂದ ರಕ್ಷಣೆ ಮಾಡಿ ಸರ್ಕಾರ ಹಾಗೂ ಬಿಬಿಎಂಪಿ ಅಧೀನದಲ್ಲೇ ಇರುವಂತೆ ನೋಡಿಕೊಳ್ಳಬೇಕು. ಇದಕ್ಕಂತಲೇ ಇಲ್ಲಿ ಉನ್ನತ ಐಪಿಎಸ್ ಅಧಿಕಾರಿಗಳನ್ನು ನಿಯೋಜನೆ ಮಾಡಿ, ADGP, SP, DYSP ಹೀಗೆ ಪೊಲೀಸ್ ಹೈರಾರ್ಕಿಯಂತೆ ನೇಮಕಾತಿಯೂ ನಡೆದಿರುತ್ತದೆ. ಆದರೆ ಲಕ್ಷ ಖರ್ಚು ಮಾಡಿ ಇಲಾಖೆ ನಡೆಸಿದ್ರೂ ಈ ಕಾರ್ಯಪಡೆಯಿಂದ ಯಾವುದೇ ಪ್ರಯೋಜನ ಆಗ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. RTI ನಲ್ಲಿ ಪಡೆದ ದಾಖಲೆಗಳು ಇದಕ್ಕೆ ನೀಡ್ತಿದೆ ಪುಷ್ಠಿ ನೀಡುವಂತಿದೆ
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರೋ BMTF ವಿರುದ್ಧ ಸಾರ್ವಜನಿಕರ ಅಸಮಧಾ
ಕಳೆದ ಐದು ವರ್ಷದಲ್ಲಿ ಸಾವಿರಾರು ದೂರು ಬಂದರೂ BMTF ಅಧಿಕಾರಿಗಳು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಕಾಲಹರಣ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಸಾವಿರಾರು ದೂರುಗಳು ಬಂದ್ರೂ ಶಿಕ್ಷೆ ಪ್ರಮಾಣ ಮಾತ್ರ ಶೂನ್ಯವಾಗಿದೆ. ಬೆಂಗಳೂರಿನಲ್ಲಿರುವ ಎಲ್ಲಾ ಸರ್ಕಾರಿ ಆಸ್ತಿ ಕಾಪಾಡಬೇಕಾದ ಇಲಾಖೆ ಇದಾಗಿದ್ದು, ಇವರೇ ಆಸ್ತಿ ರಕ್ಷಣೆ ಮಾಡುವ ಬದಲು ಭ್ರಷ್ಟರ ರಕ್ಷಣೆ ಮಾಡ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಈ ಅನುಮಾನ ಯಾಕಂದ್ರೆ ಕಳೆದ ಹಲವು ವರ್ಷಗಳಿಂದ ಯಾವೊಂದು ಪ್ರಕರಣದಲ್ಲೂ ಕಾರ್ಯಪ್ರವೃತ್ತವಾಗಿಲ್ಲ BMTF ಎನ್ನುವುದು. RTI ನಲ್ಲಿ ಪಡೆದ ದಾಖಲೆಯಲ್ಲಿ BMTF ಕಾರ್ಯವೈಖರಿ ಬಟಾಬಯಲಾಗಿ
ಇದನ್ನೂ ಓದಿ: Karwar: ಮತ್ತೆ ಕಾರವಾರದಲ್ಲಿ ಕೊಂಕಣಿ, ಕನ್ನಡ ಭಾಷಾ ವಿವಾದ; ನಗರಸಭೆಯಲ್ಲಿ ಮಾತಿನ ಚ
ಕಳೆದ ಐದು ವರ್ಷದ BMTF ಸಾಧನೆಯ ಅಂಕಿ ಅಂಶವೇ BMTFನದ್ದು ಶೂನ್ಯ ಕೆಲಸ ಅಂತ ಸಾರಿ ಹೇಳುತ್ತದೆ. 2018ರಿಂದ 2022ರ ವರೆಗೆ BMTF ಗೆ ಬರೋಬ್ಬರಿ 1,689 ದೂರುಗಳು ಬಂದಿದ್ದು, ಈ ಪೈಕಿ 13 ಪ್ರಕರಣಗಳಿಗೆ ಬಿ ರಿಪೋರ್ಟ್ ನೀಡಿದ್ದಾರೆ. ಆದರೆ ಉಳಿದ 1,600ಕ್ಕೂ ಹೆಚ್ಚಿನ ದೂರುಗಳ ಕಥೆಯೇನು ಅಂತ ಕೇಳಿದರೆ ಅಷ್ಟರಲೇ ಇದೆ. ಆಶ್ಚರ್ಯಕರ ಸಂಗತಿ ಎಂದರೆ ಕಳೆದ ಐದು ವರ್ಷದಲ್ಲಿ ಒಂದೇ ಒಂದು ಪಪ್ರಕರಣದಲ್ಲೂ ಯಾವೊಬ್ಬ ಅಪರಾಧಿಗೂ ಶಿಕ್ಷೆಯಾಗಿಲ್ಲ. BMTFನ ಈ ನಡೆ ಅಷ್ಟಕ್ಕೂ BMTFನ ಕೆಲಸ ಏನು ಎಂಬ ಪ್ರಶ್ನೆ ಮೂಡುವಂತೆ ಮಾಡಿ
BMTF ಕಾರ್ಯವೇನು..
- ಸರ್ಕಾರಿ ಸ್ವತ್ತನ್ನ ರಕ್ಷಣೆ ಮಾಡುವು
- ಸರ್ಕಾರಿ ಆಸ್ತಿಗಳನ್ನ ರಕ್ಷಣೆ ಮಾಡುವು
- ಒತ್ತುವರಿ ಆಗಿರೋ ಸ್ವತ್ತನ್ನ ತೆರವು ಮಾಡುವುದು
- ಬಫರ್ ಝೋನ್ ನಲ್ಲಿ ಒತ್ತುವರಿ ಇದ್ರೆ ತೆರವು ಮಾಡಬೇ
BMTF ಮೇಲಿರುವ ಆರೋಪಗಳೇನು
- ವೆಬ್ ಸೈಟ್ ನಲ್ಲಿ ಯಾವುದೇ ಮಾಹಿತಿ ಹಾಕುತ್ತಿ
- ಪಾರದರ್ಶಕ ಆಡಳಿತ ನಡೆಸ್ತಿಲ್ಲ
- ಭೂಗಳ್ಳರನ್ನ ರಕ್ಷಣೆ ಮಾಡುವ ಕೆಲ್ಸ ಆಗ್ತಿ
- ರಸ್ತೆ ಒತ್ತುವರಿ ಆಗಿದೆ ಅಂತ ದೂರು ಕೊಟ್ರೂ ಕ್ರಮ ಆಗಿಲ್ಲ
- ದೂರುದಾರರಿಗೆ ಸರಿಯಾದ ಮಾಹಿತಿ ನೀಡ್ತಿ
- ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದೆ ರಕ್ಷಣೆ
ಇದನ್ನೂ ಓದಿ: Siddaramaiah: ಕಾಂಗ್ರೆಸ್ 130ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದು ನಿಶ್ಚಿ
ಮಾಡೋ ಕೆಲ್ಸ ಮಾಡಿ ಅಂದ್ರೆ ಮತ್ತೊಂದು ಜವಾಬ್ದಾರಿ ನೀಡಿ ಅಂತ ಸರ್ಕಾರಕ್ಕೆ
ಸರ್ಕಾರಿ ಸ್ವತ್ತನ್ನ ರಕ್ಷಣೆ ಮಾಡದೇ ಕಾಲಹರಣ ಮಾಡ್ತಿದೆ ಅನ್ನೋ ಆರೋಪ ತಮ್ಮ ಮೇಲೆ ಇದ್ದರೂ ಮತ್ತಷ್ಟು ಅಧಿಕಾರಿ ವ್ಯಾಪ್ತಿ ಕೊಡಿ ಅಂತ ನಗರಾಭಿವೃದ್ಧಿ ಇಲಾಖೆಗೆ BMTF ADGP ಪತ್ರ ಬರೆದಿದ್ದಾರೆ. ಈಗಿರೋ ಕಾರ್ಯದ ಜತೆ ಅಕ್ರಮ ಕಟ್ಟಡಗಳ ತೆರವು ಜವಾಬ್ದಾರಿ ನೀಡುವಂತೆ ಪತ್ರ ಬರೆಯಲಾಗಿದೆ. ಈ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಡ್ತಿದೆ. ಪತ್ರ !ತಲ್ಲದೆಲ್ಲ.?ಕುದುದು?ದೆ.ಕಮಕಿದೆ.ನ !. !ಈ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಡ್ತಿದೆ.
Post a Comment