ಡಿಸೆಂಬರ್ 5 ರಂದು ಸಂಜೆ ಆಜಾದ್ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಪ್ರಮುಖ ನಾಯಕರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಬಿಜೆಪಿ ಈಗಾಗಲೇ ಘೋಷಿಸಿದೆ. ಎನ್ಸಿಪಿ ನಾಯಕ ಅಜಿತ್ ಪವಾರ್ ಅವರು ಸರ್ಕಾರ ರಚನೆ ಕುರಿತು ಮಾತುಕತೆಗಾಗಿ ದೆಹಲಿಯಲ್ಲಿದ್ದಾರೆ.
ಮುಂಬೈನಲ್ಲಿ (Mumbai) ಡಿಸೆಂಬರ್ 5 ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ (Oath Taking Ceremony) ಮುನ್ನ ಮಹಾಯುತಿ (Mahayuti) ಪಕ್ಷಗಳು ಪ್ರಮುಖ ಖಾತೆಗಳ ಹಂಚಿಕೆಯನ್ನು ಇನ್ನೂ ನಿರ್ಧರಿಸದ ಕಾರಣ ಮಹಾರಾಷ್ಟ್ರದ (Maharashtra) ಮುಂದಿನ ಮುಖ್ಯಮಂತ್ರಿ ಯಾರೆಂಬ ಸಸ್ಪೆನ್ಸ್ ಮುಂದುವರೆದಿದೆ. ಏಕನಾಥ್ ಶಿಂಧೆ (Eknath Shinde) ಅವರ ಹಿಂದಿನ ನಿಲುವು ಬಿಜೆಪಿ ಸಿಎಂ ಚುಕ್ಕಾಣಿ ಹಿಡಿಯಲು ದಾರಿ ಮಾಡಿಕೊಟ್ಟರೆ, ಯಾವುದೇ ಅಧಿಕೃತ ಘೋಷಣೆ ಇಲ್ಲದೆ ಇನ್ನೊಂದು ದಿನ ಕಳೆಯಿತು.
ನಾಳೆ (ಡಿಸೆಂಬರ್ 4) ಬೆಳಿಗ್ಗೆ 10 ಗಂಟೆಗೆ ಮಹಾರಾಷ್ಟ್ರ ವಿಧಾನ ಭವನದಲ್ಲಿ ನಡೆಯಲಿರುವ ಪ್ರಮುಖ ಬಿಜೆಪಿ ಶಾಸಕಾಂಗ ಸಭೆಯ ಮೇಲೆ ಈಗ ಎಲ್ಲರ ಕಣ್ಣಿಟ್ಟಿದ್ದಾರೆ. ವಿರೋಧ ಪಕ್ಷವಾದ ಮಹಾ ವಿಕಾಸ್ ಅಘಾಡಿ (MVA) ವಿರುದ್ಧ ಮಹಾಯುತಿ ಮೈತ್ರಿಕೂಟವು ಭರ್ಜರಿ ಗೆಲುವು ಸಾಧಿಸಿದ ವಾರಗಳ ನಂತರ ಮಹಾರಾಷ್ಟ್ರದ ಮುಂದಿನ ಸಿಎಂ ಅವರ ಆಯ್ಕೆಯನ್ನು ಘೋಷಿಸುವ ನಿರೀಕ್ಷೆಯಿದೆ.
ಡಿಸೆಂಬರ್ 5 ರಂದು ಸಂಜೆ ಆಜಾದ್ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಪ್ರಮುಖ ನಾಯಕರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಬಿಜೆಪಿ ಈಗಾಗಲೇ ಘೋಷಿಸಿದೆ. ಎನ್ಸಿಪಿ ನಾಯಕ ಅಜಿತ್ ಪವಾರ್ ಅವರು ಸರ್ಕಾರ ರಚನೆ ಕುರಿತು ಮಾತುಕತೆಗಾಗಿ ದೆಹಲಿಯಲ್ಲಿದ್ದಾರೆ.
ಡಿಸೆಂಬರ್ 4 ರಂದು ಏನಾಗಲಿದೆ?
ಬಿಜೆಪಿಯು ನಾಳೆ ಶಾಸಕಾಂಗ ಪಕ್ಷದ ಸಭೆಯನ್ನು ನಡೆಸುತ್ತಿದ್ದು, ಅಲ್ಲಿ ತನ್ನ ಶಾಸಕಾಂಗ ಪಕ್ಷದ ನಾಯಕ ಮತ್ತು ಮಹಾರಾಷ್ಟ್ರದ ಸಿಎಂ ಅನ್ನು ಘೋಷಿಸುವ ನಿರೀಕ್ಷೆಯಿದೆ. ಡಿಸೆಂಬರ್ 5 ರಂದು ಸಂಜೆ ಮಹಾಯುತಿ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಬಿಜೆಪಿಯ ರಾಜ್ಯ ಘಟಕ ಘೋಷಿಸಿದ್ದು, ಶಿಂಧೆ ಸೇನೆಗೆ ಆಘಾತವಾಗಿದೆ. ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯ ನಂತರ, ಸಭೆಯಲ್ಲಿ ಮಹಾರಾಷ್ಟ್ರ ಸಿಎಂ ಹೆಸರನ್ನು ಘೋಷಿಸುವ ನಿರೀಕ್ಷೆಯಿದೆ. ಈ ನಡುವೆ ಆಜಾದ್ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಿದ್ಧತೆ ಭರದಿಂದ ಸಾಗುತ್ತಿದೆ ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬವಾಂಕುಲೆ ತಿಳಿಸಿದ್ದಾರೆ.
ಫಡ್ನವೀಸ್ ಹೆಸರು ಅಂತಿಮ
ಮಹಾರಾಷ್ಟ್ರದ ನೂತನ ಸಿಎಂ ಆಗಿ ದೇವೇಂದ್ರ ಫಡ್ನವೀಸ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ಭಾನುವಾರ ತಿಳಿಸಿದ್ದಾರೆ. ಎರಡು ಬಾರಿ ಸಿಎಂ ಆಗಿರುವ ಅವರು ಮಹಾಯುತಿ ವಿಜಯದ ನಂತರ ಉನ್ನತ ಹುದ್ದೆಗೆ ಮುಂಚೂಣಿಯಲ್ಲಿದ್ದವರು ಎಂದು ಕಂಡುಬಂದಿದೆ. ಮಹಾರಾಷ್ಟ್ರದ ಹಂಗಾಮಿ ಸಿಎಂ ಏಕನಾಥ್ ಶಿಂಧೆ ಅವರನ್ನು ಉಪಮುಖ್ಯಮಂತ್ರಿಯಾಗಿ ನೇಮಕ ಮಾಡುವ ಸಾಧ್ಯತೆ ಇದೆ ಎಂದು ಮತ್ತೊಂದು ಬಿಜೆಪಿ ಮೂಲವು ಸಿಎನ್ಎನ್-ನ್ಯೂಸ್ 18 ಗೆ ತಿಳಿಸಿದೆ
ಸರ್ಕಾರ ರಚನೆ ಮಾತುಕತೆಗಾಗಿ ದೆಹಲಿ ತಲುಪಿದ ಅಜಿತ್ ಪವಾರ್
ಎನ್ಸಿಪಿ ನಾಯಕ ಅಜಿತ್ ಪವಾರ್ ಅವರು ಸರ್ಕಾರ ರಚನೆ ಕುರಿತು ಮಾತುಕತೆಗಾಗಿ ಬಿಜೆಪಿಯ ಉನ್ನತ ನಾಯಕರನ್ನು ಭೇಟಿ ಮಾಡಲು ದೆಹಲಿಗೆ ಬಂದಿದ್ದಾರೆ. ಅವರು ಕ್ಯಾಬಿನೆಟ್ ಹಂಚಿಕೆ ಮತ್ತು ಸಚಿವಾಲಯಗಳ ಹಂಚಿಕೆಯ ಸೂತ್ರವನ್ನು ಚರ್ಚಿಸಲು ಒಂದು ವಾರದೊಳಗೆ ಎರಡನೇ ಬಾರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ.
ಪ್ರಮುಖ ಖಾತೆಗಳಿಗೆ ಬೇಡಿಕೆ
ಅಜಿತ್ ಪವಾರ್ ಬಣವು ಬಿಜೆಪಿಯ ಮುಖ್ಯಮಂತ್ರಿಯ ಹಿಂದೆ ಇರುವ ಸೂಚನೆ ನೀಡಿದ್ದು, ಮೂರು ಪಕ್ಷಗಳು ಸಂಪುಟದಲ್ಲಿ ಅಧಿಕಾರ ಹಂಚಿಕೆಯ ಕುರಿತು ಮಾತುಕತೆಗಳಲ್ಲಿ ತೊಡಗಿವೆ. ಶಿಂಧೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಗೃಹ ಸಚಿವಾಲಯವನ್ನು ಬಯಸುತ್ತಾರೆ, ಇದು ಬಿಜೆಪಿಗೆ ಇಷ್ಟವಿಲ್ಲ. ಇತ್ತ ಹಣಕಾಸು ಸಚಿವಾಲಯಕ್ಕಾಗಿ ಎನ್ಸಿಪಿ ಬೇಡಿಕೆ ಇಟ್ಟಿದೆ. ಶಿಂಧೆ, ಅಜಿತ್ ಪವಾರ್ ಮತ್ತು ಫಡ್ನವೀಸ್ ಅವರು ಶುಕ್ರವಾರ ಸರ್ಕಾರ ರಚನೆಯ ಬಗ್ಗೆ ಮಾತುಕತೆ ನಡೆಸಲು ಯೋಜಿಸಿದ್ದರು. ಆದರೆ, ಶಿಂಧೆ ಅವರ ಅನಾರೋಗ್ಯದ ನಂತರ ಸತಾರಾ ಜಿಲ್ಲೆಯ ತಮ್ಮ ಗ್ರಾಮಕ್ಕೆ ತೆರಳಿದ ಹಿನ್ನೆಲೆ ಮಾತುಕತೆ ಸಾಧ್ಯವಾಗಿಲ್ಲ. ಸೋಮವಾರ ಚರ್ಚೆ ಪುನರಾರಂಭವಾಗಲಿದೆ ಎಂದು ಅವರು ಹೇಳಿದರು, ಆದರೆ ಆ ಸಭೆಯನ್ನು ಸಹ ರದ್ದುಗೊಳಿಸಲಾಯಿತು.
ಶಿಂಧೆಗೆ ದೇವೆಂದ್ರ ಫಡ್ನವಿಸ್ ಕರೆ
ಏಕ್ನಾಥ್ ಶಿಂಧೆ ಅವರು ತಮ್ಮ ಹುಟ್ಟೂರಾದ ಸತಾರಾದಲ್ಲಿ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಕಾರಣ ವೈದ್ಯರು ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ ನಂತರ ಸೋಮವಾರ ತಮ್ಮ ಎಲ್ಲಾ ಅಪಾಯಿಂಟ್ಮೆಂಟ್ ಮತ್ತು ಸಭೆಗಳನ್ನು ರದ್ದುಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಮಹಾಯುತಿ ಸಭೆಯನ್ನು ರದ್ದುಗೊಳಿಸಲಾಗಿದ್ದು, ದೇವೆಂದ್ರ ಫಡ್ನವೀಸ್ ಅವರು ಶಿಂಧೆ ಅವರಿಗೆ ಕರೆ ಮಾಡಿ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ.

Post a Comment