ದಕ್ಷಿಣ ಲೆಬನಾನ್ನಲ್ಲಿ ಭಾರತೀಯ ಸೈನಿಕರು
ದಕ್ಷಿಣ ಲೆಬನಾನ್ನಲ್ಲಿ ಇಸ್ರೇಲ್ ಭೂದಾಳಿ ನಡೆಸಿರುವುದು ದೊಡ್ಡ ವಿಷಯವಾಗಿದೆ. ಈ ಪ್ರದೇಶವನ್ನು ಹಿಜ್ಬುಲ್ಲಾದ ಸುರಕ್ಷಿತ ತಾಣವೆಂದು ಪರಿಗಣಿಸಲಾಗಿದೆ, ಆದ್ದರಿಂದ ಭೀಕರ ಸಶಸ್ತ್ರ ಸಂಘರ್ಷದ ನಡುವೆ ಭಾರತೀಯ ಸೈನಿಕರು ಅಲ್ಲಿ ಏನು ಮಾಡುತ್ತಿದ್ದಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ?
ಲೆಬನಾನ್: ಹಮಾಸ್ನ (Hamas) ಕೃತ್ಯದ ಪರಿಣಾಮಗಳನ್ನು (Consequences) ಇಡೀ ಪಶ್ಚಿಮ ಏಷ್ಯಾ (West Asia) ಅನುಭವಿಸಬೇಕಾಗಿದೆ. ಇಸ್ರೇಲ್-ಹಿಜ್ಬುಲ್ಲಾ (Israel-Hezbollah) ಜೊತೆಗೆ, ಈಗ ಇರಾನ್ನೊಂದಿಗಿನ ಯುದ್ಧದ ಭಯವೂ ಗಾಢವಾಗಿದೆ, ಇದು ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರಬಹುದು. ಈ ನಡುವೆ ಇಸ್ರೇಲ್ ಲೆಬನಾನ್ನಲ್ಲಿ (Lebanon) ಭೂದಾಳಿಯನ್ನು ಪ್ರಾರಂಭಿಸಿದೆ. ಇಂತಹ ಸಮಯದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಹೆಚ್ಚಿದೆ. ಇದೆಲ್ಲದರ ನಡುವೆಯೂ 900ಕ್ಕೂ ಹೆಚ್ಚು ಭಾರತೀಯ ಸೈನಿಕರು ದಕ್ಷಿಣ ಲೆಬನಾನ್ನಲ್ಲಿ ಮುಂಚೂಣಿಯಲ್ಲಿದ್ದಾರೆ.
ದಕ್ಷಿಣ ಲೆಬನಾನ್ನಲ್ಲಿ ಇಸ್ರೇಲ್ ಭೂದಾಳಿ ನಡೆಸಿರುವುದು ದೊಡ್ಡ ವಿಷಯ. ಈ ಪ್ರದೇಶವನ್ನು ಹಿಜ್ಬುಲ್ಲಾದ ಸುರಕ್ಷಿತ ತಾಣವೆಂದು ಪರಿಗಣಿಸಲಾಗಿದೆ, ಆದ್ದರಿಂದ ಭೀಕರ ಸಶಸ್ತ್ರ ಸಂಘರ್ಷದ ನಡುವೆ ಭಾರತೀಯ ಸೈನಿಕರು ಅಲ್ಲಿ ಏನು ಮಾಡುತ್ತಿದ್ದಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ? ದಕ್ಷಿಣ ಲೆಬನಾನ್ನಲ್ಲಿ ಭಾರತೀಯ ಸೈನಿಕರು ಯಾರ ಪರವಾಗಿ ಕೆಲಸ ಮಾಡುತ್ತಿದ್ದಾರೆ?
ವಿಶ್ವಸಂಸ್ಥೆಯ ಕಾರ್ಯಾಚರಣೆಯ ಭಾಗವಾಗಿ ಉಪಸ್ಥಿತಿ
ವಾಸ್ತವವಾಗಿ ದಕ್ಷಿಣ ಲೆಬನಾನ್ನಲ್ಲಿರುವ ಭಾರತೀಯ ಸೈನಿಕರು ವಿಶ್ವಸಂಸ್ಥೆಯ (UN) ಕಾರ್ಯಾಚರಣೆಯ ಭಾಗವಾಗಿ ಅಲ್ಲಿ ಉಪಸ್ಥಿತರಿದ್ದಾರೆ. ದಕ್ಷಿಣ ಲೆಬನಾನ್ನಲ್ಲಿರುವ ವಿಶ್ವಸಂಸ್ಥೆಯ ಮಧ್ಯಂತರ ಪಡೆ (UNIFIL) ಅಡಿಯಲ್ಲಿ ಭಾರತದ ಸೈನಿಕರು ತೊಂದರೆಗೀಡಾದ ದಕ್ಷಿಣ ಲೆಬನಾನ್ನಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಇಸ್ರೇಲ್ನ ಗಾಜಾ ದಾಳಿಯ ನಂತರ, ಹಿಜ್ಬುಲ್ಲಾ ಕೂಡ ಹಮಾಸ್ ಜೊತೆ ಸೇರಿದೆ. ಲೆಬನಾನ್ನಿಂದ ಇಸ್ರೇಲ್ಗೆ ನಿರಂತರವಾಗಿ ರಾಕೆಟ್ಗಳು ಮತ್ತು ಕ್ಷಿಪಣಿಗಳನ್ನು ಹಾರಿಸಲಾಯಿತು. ಅಂದಿನಿಂದ ನಿರಂತರವಾಗಿ ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚುತ್ತಲೇ ಇದೆ. ಲೆಬನಾನ್ನಲ್ಲಿ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾನನ್ನು ಕೊಂದ ನಂತರ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಇದರ ಹೊರತಾಗಿಯೂ, ಭಾರತೀಯ ಶಾಂತಿಪಾಲನಾ ಪಡೆ ಸಂಪೂರ್ಣ ಜಾಗರೂಕತೆಯಿಂದ ದಕ್ಷಿಣ ಲೆಬನಾನ್ನಲ್ಲಿ ಮುಂಭಾಗದಲ್ಲಿ ನಿಂತಿದೆ. ಭಾರತೀಯ ಸೈನಿಕರು ಸ್ಥಳೀಯ ನಾಗರಿಕರನ್ನು ರಕ್ಷಿಸುವ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.
‘ಭಾರತೀಯ ಸೈನಿಕರು ಸುರಕ್ಷಿತವಾಗಿದ್ದಾರೆ’
ದಕ್ಷಿಣ ಲೆಬನಾನ್ನಲ್ಲಿ ವಿಶ್ವಸಂಸ್ಥೆಯ ಕಾರ್ಯಾಚರಣೆಯ ಅಡಿಯಲ್ಲಿ ನಿಯೋಜಿಸಲಾದ ಎಲ್ಲಾ ಭಾರತೀಯ ಸೈನಿಕರು ಸುರಕ್ಷಿತವಾಗಿದ್ದಾರೆ ಎಂದು UNIFIL ಗೆ ಸಂಬಂಧಿಸಿದ ಮೂಲಗಳು ತಿಳಿಸಿವೆ. ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ UNIFIL ಮೂಲಗಳು, ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಹೊರತಾಗಿಯೂ, ಭಾರತೀಯ ಬೆಟಾಲಿಯನ್ನ 900ಕ್ಕೂ ಹೆಚ್ಚು ಸೈನಿಕರು ತಮ್ಮ ಕರ್ತವ್ಯವನ್ನು ಸಂಪೂರ್ಣ ಜಾಗರೂಕತೆಯಿಂದ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು. ಎಲ್ಲಾ ಭಾರತೀಯ ಯೋಧರು ಸುರಕ್ಷಿತವಾಗಿದ್ದಾರೆ ಎಂದು ಹೇಳಿದರು. ಇಸ್ರೇಲಿ ರಾಷ್ಟ್ರೀಯ ಭದ್ರತಾ ಕ್ಯಾಬಿನೆಟ್ ಲೆಬನಾನ್ನಲ್ಲಿ ಭೂದಾಳಿಗೆ ಹಸಿರು ನಿಶಾನೆ ತೋರಿಸಿದೆ. ಇದಾದ ನಂತರ, ಇಸ್ರೇಲಿ ಸೇನೆಯು ದಕ್ಷಿಣ ಲೆಬನಾನ್ನಿಂದ ಭೂದಾಳಿ ಪ್ರಾರಂಭಿಸಿದೆ. ಮುಂಬರುವ ದಿನಗಳಲ್ಲಿ ಯುದ್ಧ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಹೆಚ್ಚಿದೆ.
ಲೆಬನಾನ್ನಲ್ಲಿ ಭೂದಾಳಿ ಪ್ರಾರಂಭಿಸುವ ಮೊದಲು ಇಸ್ರೇಲಿ ರಕ್ಷಣಾ ಪಡೆಗಳು (ಐಡಿಎಫ್) ಪೂರ್ವ ಮಾಹಿತಿಯನ್ನು ನೀಡಿದ್ದವು ಎಂದು ಈಗಾಗಲೇ UNIFIL ಮಾಹಿತಿಯನ್ನು ನೀಡಿದೆ . ಇದಾದ ನಂತರ UNIFIL ಮಿಷನ್ ಅಡಿಯಲ್ಲಿ ನಿಯೋಜಿಸಲಾದ ಸೈನಿಕರು ಕೂಡ ಎಚ್ಚರಗೊಂಡರು. ಮತ್ತೊಂದೆಡೆ, UNIFIL ಶಾಂತಿಯನ್ನು ಕಾಪಾಡಿಕೊಳ್ಳಲು ಮತ್ತು ಬಫರ್ ವಲಯವನ್ನು ಅತಿಕ್ರಮಿಸದಂತೆ ಮನವಿ ಮಾಡಿದೆ. ಯುನಿಫಿಲ್ ಮಿಷನ್ ಅಡಿಯಲ್ಲಿ 50 ದೇಶಗಳ ಸುಮಾರು 10,500 ಸೈನಿಕರನ್ನು ನಿಯೋಜಿಸಲಾಗಿದೆ. UNIFIL ಅಡಿಯಲ್ಲಿ ಶಾಂತಿಪಾಲನಾ ಪಡೆಯ ಮುಖ್ಯ ಕೆಲಸವು ಸಂಬಂಧಪಟ್ಟ ಪ್ರದೇಶದಲ್ಲಿ ಶಾಂತಿಯನ್ನು ಕಾಪಾಡುವುದು ಮತ್ತು ನಾಗರಿಕರಿಗೆ ಸಹಾಯ ಮಾಡುವ ಕೆಲಸದಲ್ಲಿ ತೊಡಗಿವೆ.

Post a Comment