ಯುವಕರಿಗೆ ಚಾಕು ಇರಿತ
ಗಲ್ಲಿಯ ಗಣಪತಿ ಮೆರವಣಿಗೆ ಸಮಯದಲ್ಲಿ ದುರ್ಗಾ ಸರ್ಕಲ್ ಗೆ ಬಂದಾಗ ಗಲಾಟೆ ನಡೆದಿದೆ. ದುರ್ಗಾ ವೃತ್ತದಲ್ಲಿರುವ ಮಸೀದಿ ಎದುರು ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.
ಹಾವೇರಿ (ಸೆ.20): ಹಾವೇರಿ (Haveri) ಜಿಲ್ಲೆ ರಾಣೆಬೆನ್ನೂರಿನ ನಗರದಲ್ಲಿ ಗಣಪತಿ ಮೂರ್ತಿ ವಿಸರ್ಜನೆ ವೇಳೆ ಯುವಕರಿಗೆ (Youths) ಚೂರಿಯಿಂದ ಇರಿಯಲಾಗಿದೆ ಎನ್ನಲಾಗ್ತಿದೆ. ರಾಣೆಬೆನ್ನೂರಿನ ನಗರದಲ್ಲಿ ನಡೆದ ಘಟನೆ ಇಬ್ಬರು ಯುವಕರಿಗೆ ಚೂರಿ ಇರಿತವಾಗಿದೆ, ಗಾಯಾಳು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ (Police) ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಗಲ್ಲಿಯ ಗಣಪತಿ ಮೆರವಣಿಗೆ (Ganapati utsav) ಸಮಯದಲ್ಲಿ ದುರ್ಗಾ ಸರ್ಕಲ್ ಗೆ ಬಂದಾಗ ಗಲಾಟೆ ನಡೆದಿದೆ. ದುರ್ಗಾ ವೃತ್ತದಲ್ಲಿರುವ ಮಸೀದಿ ಎದುರು ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.

Post a Comment