ರಾಜ್ಯ ಸರ್ಕಾರ ವಾಹನ ಸವಾರರಿಗೆ ಶುಭ ಸುದ್ದಿ ನೀಡಿದೆ. ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಪಾವತಿಗೆ ಶೇಕಡಾ 50ರಷ್ಟು ರಿಯಾಯಿತಿಯನ್ನು ನೀಡಿ ಸರ್ಕಾರ ಮತ್ತೆ ಆದೇಶ ಹೊರಡಿಸಿದೆ.ಫೆಬ್ರವರಿ 11ರೊಳಗೆ ದಾಖಲಾದ ಪ್ರಕರಣಗಳಿಗೆ ಇದು ಅನ್ವಯವಾಗಲಿದೆ. 15 ದಿನದಲ್ಲಿ ದಂಡ ಕಟ್ಟಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ.ಇಂದಿನಿಂದ (ಮಾರ್ಚ್ 4) ಮುಂದಿನ 15 ದಿನಗಳವರೆಗೆ ಈ ವಿಶೇಷ ರಿಯಾಯ್ತಿ ನೀಡಿ ರಾಜ್ಯ ಸಂಚಾರಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.ಫೆಬ್ರವರಿ 11, 2023ರ ಒಳಗಾಗಿ ಅನ್ವಯವಾಗುವ ಪ್ರಕರಣಗಳಿಗೆ ಒಂದು ಬಾರಿಯ ಕ್ರಮವಾಗಿ ಸಂಚಾರಿ ಇ-ಚಲನ್ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50ರಷ್ಟು ರಿಯಾಯ್ತಿ ನೀಡಿ ಆದೇಶ ಹೊರಡಿಸಲಾಗಿದೆ.ಫೆಬ್ರವರಿ 14ರಂದು ನಡೆದ ಉನ್ನತ ಸಭೆಯಲ್ಲಿ ದಂಡ ಪಾವತಿಯ ಅವಧಿ ವಿಸ್ತರಣೆ ಕುರಿತು ಪ್ರಸ್ತವಾನೆ ಸಲ್ಲಿಸಲಾಗಿತ್ತು.
4/ 7
ಟ್ರಾಫಿಕ್ ದಂಡ ಪಾವತಿಯ ಶೇ.50ರಷ್ಟು ನೀಡಲಾಗುತ್ತಿರುವ ರಿಯಾಯ್ತಿ ಅವಧಿಯನ್ನು ಮುಂದಿನ ಐದು ತಿಂಗಳವರೆಗೆ ವಿಸ್ತರಿಸಬೇಕು ಎಂದು ಜೆಡಿಎಸ್ ಎಂಎಲ್ಸಿ ಮಂಜೇಗೌಡರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು.ವಿಧಾನ ಪರಿಷತ್ ಶೂನ್ಯ ವೇಳೆಯಲ್ಲಿ ಮಾತನಾಡಿದ್ದ ಮಂಜೇಗೌಡರು, ಶೇ.50 ರಿಯಾಯ್ತಿ ನೀಡಿದ ಮೇಲೆ 100 ಕೋಟಿಗೂ ಅಧಿಕ ಆದಾಯ ಸಂಗ್ರಹವಾಗಿದೆ. ಇನ್ನು ಸಾವಿರಾರು ಪ್ರಕರಣಗಳು ಬಾಕಿ ಉಳಿದ ಹಿನ್ನೆಲೆ ಅವಧಿ ವಿಸ್ತರಣೆ ಮಾಡುವಂತೆ ಹೇಳಿದ್ದರು.ಬೆಂಗಳೂರು ಒನ್ ನಲ್ಲಿ ಸರ್ವರ್ ಸಮಸ್ಯೆಯುಂಟಾದ ಹಿನ್ನೆಲೆ ಬಹುತೇಕರಿಗೆ ದಂಡ ಪಾವತಿಸಲು ಆಗಿಲ್ಲ. ತಾಂತ್ರಿಕ ಕಾರಣಗಳಿಂದ ಸಾರ್ವಜನಿಕರಿಗೆ ಸಮಸ್ಯೆಯುಂಟಾಗಿದೆ ಎಂದು ಮಂಜೇಗೌಡರು ಸರ್ಕಾರದ ಗಮನಕ್ಕೆ ತಂದಿದ್ದರು.







Post a Comment